Wednesday, October 10, 2012

ಇವತ್ತು west ಎಂದು ಮಾರಾಟ ಮಾಡಲ್ಪಟ್ಟ pepar ಗಾಳಿಪಟವಾಗಿ ಆಕಾಶದಲ್ಲಿ ಹಾರುವಾಗ ನಾವೇ ಕಣ್ಣರಳಿಸಿ ನೋಡುತ್ತೇವೆ. ಯಾರಲ್ಲಿ ಎಂತಹ ಪ್ರತಿಬೆ ಇರಬಹುದು ಎಂಬದು ನಮಗೆ ಗೊತ್ತಿರವುದಿಲ್ಲ. ಸೂಕ್ತ ಕಾಲಾವಕಾಶಕ್ಕಾಗಿ ಅದು ಕಾದಿರುತ್ತದೆ. ಆದ್ದರಿಂದ ಯಾರು  ಇಂದೇನಾಗಿದ್ದಾರೆ ಎಂಬುದರಿಂದ ಒಬ್ಬರನ್ನು ನಿರ್ಲಕ್ಷಿಸಬಾರದು. ಅಥವಾ ಯಾರೇ ನಮ್ಮನ್ನು ನಿರ್ಲಕ್ಷಿಸಿದರೂ ದೃತಿಗೆಡಬಾರದು.

Tuesday, October 9, 2012

ಇಂದಿನ ಪರಿಸ್ಥಿತಿಯಲ್ಲಿ, "ಹಣದಿಂದಲೇ ಎಲ್ಲವೂ ಸಾಧ್ಯವಿಲ್ಲ " ಎಂಬ ಮಾತನ್ನು ಹಣವಿರುವವನು ಹೇಳಿದರೆ ಅದಕ್ಕೆ ಮೌಲ್ಯ ಹೆಚ್ಚು

Tuesday, October 2, 2012

ವಯಸ್ಸಾದಂತೆಲ್ಲಾ ಕನಸು ಕಾಣುವ ತೀವ್ರತೆ ಕಡಿಮೆಯಾಗುತ್ತದೆಯೇನೊ. ಅಥವಾ ಹೆಚ್ಚು ವಾಸ್ತವದೆಡೆಗೆ ಮುಖ ಮಾಡಿರುತ್ತೇವೆಯೋ!?
ಬಾಲ್ಯ ಯೌವ್ವನದ ಹುಮ್ಮಸ್ಸು, ಆ ಸಮಯದಲ್ಲಿ ಕಾಣುವ ಕನಸಿನಲ್ಲೇ ಇದೆಯೇನೊ ಎಂದು ಒಮ್ಮೆಯಾದರೂ ಅನಿಸದೇ ಇರದು.
"ಕನಸು ಕಾಣದವನು ಏನನ್ನು ಸಾಧಿಸಲಾರ" ಎಂಬ ಮಾತು ಕನಸುಗಳೇ ಇಲ್ಲವೇನೊ ಎನಿಸಿದಾಗ ತಳಮಳ ಹುಟ್ಟಿಸುತ್ತದೆ.
ನಿರಂತರ ಕೆಲಸ ಕಾರ್ಯಗಳ ನಡುವೆ ಕನಸು ಕಾಣುವ ರೊಮಾಂಚಕತೆಯನ್ನೆ ಕಳೆದುಕೊಂಡಿರುವೆನೇನೊ ಎನಿಸುತ್ತದೆ.
ಬರೇ ಕನಸನ್ನೆ ಕಾಣುತ್ತಿದ್ದರೆ ಎನು ಬಂತು? ಎನನ್ನಾದರೂ ಸಾಧೀಸಬೇಕಲ್ಲ!
ಬದುಕು ನಿರ್ಧಿಷ್ಟ ದಿಕ್ಕನ್ನು ಹಿಡಿದು ಹೊರಟಾಗ ಕನಸು ಬೇಕಿಲ್ಲವೇನೊ
ಅನಿಶ್ಚಿತತೆ ಅಥವಾ ಸಾವಿರಾರು ಅವಕಾಶಗಳೇ ಕನಸಿನ ಮೂಲವೇ?

Thursday, September 27, 2012

ಒದುತ್ತಾ ಓದುತ್ತಾ ನಾವು ಬರೆ ಓದುಗರಾಗಷ್ಟೇ ಉಳಿದು ಬಿಡುತ್ತೇವಾ? ಬರೆಯುವ, ನಮ್ಮ ಯೋಚನೆಗಳನ್ನು ಅಭಿಃವ್ಯಕ್ತಿಸುವ ಕೌಶಲ್ಯವನ್ನೆ ಕಳೆದು ಕೊಳ್ಳುತ್ತೇವಾ?  ಯೋಚನೆಗಳ ಸ್ವೀಕಾರ, ವಿವೇಚನೆ, ಮತ್ತು ಅಭಿಃವ್ಯಕ್ತಿ ಮೂರೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಅಲ್ವಾ?

Wednesday, May 23, 2012

ಪ್ರತಿಬೆಗಳು ಗ್ರಾಮದಲ್ಲಿ ಹುಟ್ಟಿ ನಗರದಲ್ಲಿ ಸಾಯುತ್ತದೆ. ನಾವು ಬಹುಪಾಲು ಎಲ್ಲರೂ ಗ್ರಾಮೀಣ ಪ್ರದೇಶದವರೇ. ಎಲ್ಲರೂ ಹೆಚ್ಚು ಕಡಿಮೆ ನಗರದಲ್ಲೇ ಇದ್ದೇವೆ.
ನಮ್ಮಂತೆ ವಲಸೆ ಬಂದು ಹೆಚ್ಚು ಕಡಿಮೆ ಹಳ್ಳಿಗಳೆಲ್ಲಾ ಮುದಿ ಗ್ರಾಮವಾಗುತ್ತಿದೆಯೇನೋ ಎಂದೆನಿಸುತ್ತಿದೆ. ಬೇರೆ ಊರುಗಳಿಗೆ ಹೋಲಿಸಿದರೆ ನಮ್ಮೂರು ಎಷ್ಟೋ ಪಾಲು ವಾಸಿ.  ನಮ್ಮ ಸಮಕಾಲೀನರು ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತಾರೆ. ಈ ಹಳ್ಳಿಗಳಿಗೆಲ್ಲಾ ಮುಂದೆ ದಿಕ್ಯಾರು.ಎಂದು ಕಾಣುತ್ತಿದೆ.
ಹಳ್ಳಿಯಲ್ಲಿ ಬದುಕು ಕಷ್ಟಕರವೆಂದು ನಮಗೆ ಅನಿಸುತ್ತಿದೆ. ಅಲ್ಲಿ ಗಳಿಕೆಯ ಅವಕಾಶವೂ ಕಡಿಮೆ. ಹಾಗೆಂದು ಹಳ್ಳಿಯ ಸಮೃದ್ದ ಪರಿಸರ ನಮಗೆ ಇಷ್ಟವಾಘುತ್ತದೆ. ಆದರೆ ಹಳ್ಳಿಗೆ ಹೋಗಿ  ನೆಲೆಸುವುದು ಸುಲಭದಲ್ಲಿಲ್ಲ. ತಾಪಾತ್ರಯಗಳೂ ಹೆಚ್ಚು. ಸಮಸ್ಯೆಯೂ ಹೆಚ್ಚು. ಜೀವನ ನಗರದಷ್ಟು ಸುಲಭವಲ್ಲ.
ಹಳ್ಳಿಗಾಡಿನ ಬದುಕು ಭವಿಷ್ಯದಲ್ಲಿ ಕಷ್ಟಕರವಾಗುಂಟು.

Wednesday, May 16, 2012

ಕನಸೊಂದ ಕಾಣುವುದು ಬಲು ಸುಲಭ ಆದರೆ ಅದನ್ನು ಸಾಕಾರಗೊಳಸಿಕೊಳ್ಳುವದು ಬಲು ಕಷ್ಟ.
ಕನಸು ವಯಸ್ಸು ಪರಿಸರ ಅವಶ್ಯಕತೆಗಳಿಗೆ ತಕ್ಕಂತೆ ಬೇರೆ ಬೇರೆ ರೀತಿಯದಾಗಿರಬಹುದು.
 ಕನಸುಗಳು ನನಸಾಗಲು ತ್ಯಾಗ, ಶ್ರಮ ಹಾಗೂ ಬೆವರಿನ ತೆರಿಗೆಯನ್ನು ಕೇಳುತ್ತವೆ.
ಎನನ್ನೊ ಗಳಿಸುವಾಗ ಎನನ್ನಾದರೂ ಕಳೆದುಕೊಳ್ಳಲೇ ಬೇಕು.
ಕನಸನ್ನು ಕಾಣದೇ ಇರುವುದು ಅದರ ಸಾಕಾರಕ್ಕಾಗಿ ಪ್ರಯತ್ನಿಸದೇ ಇರುವದು ನಿರ್ಜಿವತೆಯ ಲಕ್ಷಣ.
ಅದಕ್ಕಾಗಿ ಕ್ರಿಯಾಶೀಲರಾಗಿರಿ.

Thursday, January 5, 2012

ಭರವಸೆಯ ಬೆಳಕನರಸಿ.....

ಜಗದಲ್ಲಿ ಭರವಸೆಯಿನ್ನು ಬತ್ತಿಲ್ಲ
ಮನಸು ಹೃದಯಗಳುಂಟು
ಭಾವನೆಗೆ ಬೆಲೆಯುಂಟು
ಗೌರವಿಸುವ ನಡವಳಿಕೆಯಿರುವತನಕ!

ಅಂತ್ಯದಲ್ಲಿಯೇ ಆದಿಯೂ ಇಪ್ಪಂತೆ
ನಾಶವೇ ಹೊಸ ಸೃಷ್ಟಿಯ  ಮೂಲವಂತೆ
ಸಾವು ಹೊಸಹುಟ್ಟಿಗೆ ಅವಕಾಶವಾದಲ್ಲಿ
ಹತಾಶೆಯ ಗರ್ಭದಲ್ಲಿಯೇ ಭರವಸೆ ಹುಟ್ಟದೇನು?

 ಪ್ರತಿ ಬೆಳಗಿನಲ್ಲೂ ಕತ್ತಲಿನ ತವಕ
ಪ್ರತಿ ಇರುಳಿನಲ್ಲೂ ಬೆಳಕಿಗಾಗಿ ಹುಡುಕಾಟ
ಇರುಳುಗತ್ತಲೆಗೆ ಚಂದಿರನ ಭರವಸೆಯು
ಪ್ರತಿ ಕಿರಣದಲ್ಲೂ ಸೂರ್ಯನೀಡೊ ಭರವಸೆ!?

ನಿರಾಸೆಯು ನಮ್ಮ ಧೃತಿಗೆಡಿಸದಿರಲಿ
ಭರವಸೆಯು ತನ್ನ ತಾ ಮರೆಸದಿರಲಿ
ವೈಪಲ್ಯವೇ ಉತ್ಸಾಹದ ಮೆಟ್ಟಿಲಾಗಲಿ
ಹೊಣೆಗಾರಿಕೆಯ ಪ್ರಜ್ಞೆಯೊಂದಿರಲಿ!!